Title

ವಿಠ್ಠಲ ಮೂರ್ತಿ ಸರ್,

ಸಾಗರದವರು ನೀವು ; ಸಾಗರದಷ್ಟು ವಿಶಾಲ ಹೃದಯದವರು. ಧುಮ್ಮಿಕ್ಕುವ, ರುದ್ರ ರಮಣೀಯ ಜೋಗದ ಜಲಪಾತದ ಅವರ್ಣನೀಯ ವೈಭವವನ್ನು ಹೃದಯದಲ್ಲಿ ತುಂಬಿಕೊಂಡವರು. ಅಸೀಮ ಜಲಧಾರೆಯ ಭಾವದಿಂಚರವನ್ನು ಬರವಣಿಗೆಯಲ್ಲಿ ಭಟ್ಟಿ ಇಳಿಸಿದವರು ನೀವು. ಹಾಗಾಗಿಯೇ ನಿಮ್ಮ ಬರಹಗಳಲ್ಲಿ ಹೊಮ್ಮುವ ನೀರ ಹಾಡಿನ ನಾದ ತರಂಗಗಳು ಮನಸ್ಸುಗಳನ್ನು ಮಂತ್ರ ಮುಗ್ದ ಗೊಳಿಸುತ್ತವೆ.

ನಿಜ ಹೇಳಬೇಕೆಂದರೆ, ಪ್ರತ್ಯೇಕವಾಗಿಯೇ "ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು"💐💐💐 ನ್ನು ಬರೆಯಬೇಕು ಎಂದುಕೊಂಡೆ. ನೀವು ಎದುರಿಗೇ ಬಂದಿರಿ. ಈ ಕ್ಷಣ ಹಾರೈಸದೇ ಇರಲು ಹೇಗೆ ಸಾಧ್ಯ ಹೇಳಿ. ಬರೆಯುವುದೇನಿದ್ದರೂ ಮತ್ತೆ ಬರೆದರಾಯಿತು ಎಂದುಕೊಂಡೆ. ಈಗೇನಿದ್ದರೂ ಅಂತರಾಳದ ಅನಂತ ಹಾರೈಕೆಗಳನ್ನು ಅಕ್ಷರಕ್ಕಿಳಿಸುವ ಸಮಯ...

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Vittal Murthy ಸರ್❤💐💐💐. ನಿಮ್ಮ ಬರವಣಿಗೆಯಲ್ಲಿ ಹೊಮ್ಮುವ ಸಾತ್ವಿಕ ಸೊಬಗು ಹೃದಯಗಳನ್ನು ಸದಾ ಪರಿಮಳದಿಂದ ತುಂಬುತ್ತಲಿರಲಿ. ನಿಮ್ಮ ಸುಮಕೋಮಲ ಸಂವೇದನಾಶೀಲ ತುಡಿತಗಳು ಭಾವ ಮಾಧುರ್ಯದ ತರಂಗಗಳನ್ನು ಸೃಜಿಸಿ, ಪ್ರತಿ ಎದೆಯಲ್ಲೂ ನಿರ್ಮಲತೆಯ ನಿರಂತರತೆಯನ್ನು ಕಾರಂಜಿಯಾಗಿಸಲಿ. ನೀವು ಸದಾ ಹೀಗೆಯೇ ನಗುತ್ತಾ, ನಗೆಯ ಹೊನಲಾಗುತ್ತಾ, ಸಂತಸದ ಅಲೆ ಅಲೆಗಳಲ್ಲಿ ಮೀಯುತ್ತ, ಸಂತಸವನ್ನು ಹಂಚುತ್ತಾ, ನೂರ್ಕಾಲ ಸುಖವಾಗಿರಿ ಸರ್💐💐💐❤💐💐💐

More Literatures

" ಬದುಕು ಒಂದು ಕನಸಿನಂತೆ.

ಸ ... Read More

ನೋವು ಕಾಡುವಾಗ

ನೋವು ನುಂಗ ... Read More

.ಅರವಿಂದ ಚೊಕಾಡಿ ಎಂಬ ಮಾರ್ಗದರ್ಶ ... Read More

ದೇವರಿದ್ದಾನೆಯೇ!!!?

ಹಸಿವು ಹೈ ... Read More

ವಿಠ್ಠಲ ಮೂರ್ತಿ ಸರ್,

ಸಾಗರದವ ... Read More